Skip to main content
ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಅಗಲಿದ್ದಾರೆ ಹಾರ್ಧಿಕ್ ಪಾಂಡ್ಯ

ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಅಗಲಿದ್ದಾರೆ ಹಾರ್ಧಿಕ್ ಪಾಂಡ್ಯ .

ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಅಗಲಿದ್ದಾರೆ ಹಾರ್ದಿಕ್ ಪಾಂಡ್ಯ .

ಹಾರ್ಧಿಕ್ ಪಾಂಡ್ಯ

ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮರಳಿ ರಾಷ್ಟ್ರೀಯ ತಂಡ ಸೇರಿಕೊಳ್ಳುವುದರಲ್ಲಿದ್ದಾರೆ. ಬೆನ್ನಿನ ಶಸ್ತ್ರ ಚಿಕಿತ್ಸೆಯ ಬಳಿಕ, ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸ ಸರಣಿಯ ಮಧ್ಯೆ ಪಾಂಡ್ಯ ತಂಡಕ್ಕೆ ಮರಳು ನಿರೀಕ್ಷೆಯಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಹಾರ್ದಿಕ್, ಬೆನ್ನು ನೋವಿಗೆ ತುತ್ತಾಗಿದ್ದರು.

ಹಾರ್ದಿಕ್ ಪಾಂಡ್ಯ

ಐಎಎನ್‌ಎಸ್ ಜೊತೆ ಮಾತನಾಡಿದ ಪಾಂಡ್ಯ, ಬೆನ್ನು ನೋವಿನ ಸಮಸ್ಯೆಯನ್ನು ನಿವಾರಿಸಿಕೊಂಡು ಶೀಘ್ರ ತಾನು ಭಾರತ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯವಾಗಿ ನ್ಯೂಜಿಲೆಂಡ್ ಪ್ರವಾಸ ಸರಣಿಯ ವೇಳೆ ಪಾಂಡ್ಯ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಕಿವೀಸ್ ಸರಣಿಯ ಮೊದಲ ಟಿ20 ಪಂದ್ಯ ಜನವರಿ 24ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ.'ಬೆನ್ನು ನೋವಿನ ತೊಂದರೆಯನ್ನು ನಿಭಾಯಿಸುತ್ತಿದ್ದೇನೆ. ಶಸ್ತ್ರ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳಲು ನಾನು ಸಾಧ್ಯವಿರುವುದನ್ನೆಲ್ಲಾ ಪ್ರಯತ್ನಿಸಿದೆ. ಎಲ್ಲವೂ ಯತ್ನಿಸಿದ ಬಳಿಕ ಜಾರಿಕೊಳ್ಳುವ ಕೆಲಸವಾಗದು ಅನ್ನಿಸಿತು.

ಹಾರ್ಧಿಕ್ ಪಾಂಡ್ಯ

ಶಸ್ತ್ರ ಚಿಕಿತ್ಸೆಯ ಹೊರತಾಗಿ ತಂಡಕ್ಕೆ ನನ್ನ 100 ಶೇ. ಬೆಂಬಲ ನೀಡಲಾಗದು ಎಂಬ ಅರಿವಾಯಿತು. ಹಾಗಾಗಿ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದೆ,' ಎಂದು ಪಾಂಡ್ಯ ತಿಳಿಸಿದ್ದಾರೆ.ಯಾವಾಗ ತಂಡಕ್ಕೆ ವಾಪಸ್ಸಾಗಲಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡ್ಯ, ಶಸ್ತ್ರ ಚಿಕಿತ್ಸೆಗೆ ಹೋಗುವ ಮುನ್ನ ನ್ಯೂಜಿಲೆಂಡ್ ಸರಣಿ ಮತ್ತು ಟಿ20 ವಿಶ್ವಕಪ್ ತನ್ನ ತಲೆಯಲ್ಲಿದೆ ಎಂದರು. 'ಚಿಕಿತ್ಸೆಯ ಬಳಿಕ ಸುಧಾರಿಸಿಕೊಳ್ಳಲು ನಾನು 4 ತಿಂಗಳು ತೆಗೆದುಕೊಂಡರೂ ನ್ಯೂಜಿಲೆಂಡ್ ಸರಣಿ ಮುಗಿಯುವ ಮುನ್ನ ಅಂದರೆ ಸರಣಿ ಮಧ್ಯದಲ್ಲಿ ತಂಡಕ್ಕೆ ಬರಲಿದ್ದೇನೆ,' ಎಂದು ಪಾಂಡ್ಯ ಹೇಳಿದ್ದಾರೆ. *ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಲಿದ್ದಾರೆ ಹಾರ್ದಿಕ್ ಪಾಂಡ್ಯ..!*

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.