ಮೈ ನೇವರೆಸಿದ ,ಬಿಸಿಲೂರ ದಂಗೆ ನಾಟಕ .
ಬಳ್ಳಾರಿ: 17: ಹರಿಜ್ಞಾನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ),
![ಬಿಸಿಲೂರ ದಂಗೆ](/sites/default/files/inline-images/IMG-20200118-WA0035.jpg)
ಬಳ್ಳಾರಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಳ್ಳಾರಿ ಇವರ ಪ್ರಾಯೋಜಕತ್ವದಲ್ಲಿ “ರಂಗ ಕೈವಲ್ಯ-2020” ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ “ಬಿಸಿಲೂರ ದಂಗೆ’ ನಾಟಕವನ್ನು ರಾಧಕೃಷ್ಣ ನಾಯಕ್ ತಂಡ ಮತ್ತು ಸಮೂಹ ನೃತ್ಯವನ್ನು ಎಂ. ಸಂದೀಪ್ ವಾಲ್ಮೀಕಿ ತಂಡದವರಿಂದ ಪ್ರದರ್ಶಿಸಲಾಯಿತು.
ಪ್ರಾಸ್ತವಿಕ ನುಡಿಯನ್ನು ಹರಿಜ್ಞಾನ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಧರ (ಅರುಣ್ ಭೂಪಾಲ್)ಅವರು ಮಾತನಾಡಿ ಬಿಸಿಲೂರ ದಂಗೆ ಕಥೆ ಹುಟ್ಟಿನ ಬಗ್ಗೆ ಮಾತನಾಡುತ್ತ ಹೈದ್ರಾಬಾದ್ ಸಂಸ್ಥಾನ ವಿಮೋಚನೆಯ ಕಥೆ ನನ್ನನ್ನು ಬಹಳ ದಿನಗಳಿಂದ ಕಾಡಿದ ನಾಲ್ಕು ಹೋರಾಟಗಾರರ ಕಥೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅರ್ಜುನ್ ಹೆಗಡೆಯವರುವಹಿಸಿದ್ದರು.
![ಬಿಸಿಲೂರ ದಂಗೆ](/sites/default/files/inline-images/IMG-20200118-WA0036.jpg)
ಮುಖ್ಯ ಅಥಿತಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ರಂಗಣ್ಣನವರು, ಕನ್ನಡಸಾಹಿತ್ಯಪರಿಷತ್ತು ಜಿಲ್ಲಾಧ್ಯಕ್ಷರಾದ ಸಿದ್ದರಾಮ ಕಲ್ಮಠ , ಮಹಾದೇವ ಎಜುಕೇಶನ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಬಸವರಾಜ ಬಿಸಿಲಹಳ್ಳಿ , ಹರಿ ಜ್ಞಾನ ಸಂಸ್ಥೆ ಗೌರವ ಅಧ್ಯಕ್ಷರಾದ ಪೂಜಾ ಭೂಪಾಲ್, ಪದವಿಧರ ವೇದಿಕೆ ರಾಜ್ಯಾಧ್ಯಕ್ಷರಾದ ಗೋವರ್ಧನ್, ಸಮಾಜಸೇವಕಿ ಸಂಗಂಕಲ್ ರಾಜೇಶ್ವರಿ ಹಾಗೂಗೌರವ ಅತಿಥಿಗಳಾಗಿ ಮಂಗಳ ಬಸವರಾಜ್, ಇಂದ್ರಾಣಿ ಕಲಾ ಟ್ರಸ್ಟ್ನ ಇಂದ್ರಾಣಿವರು, ವಿಶೇಷ ಆಹ್ವಾನಿತರಾಗಿ ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಕಲಾವಿದರು ಬೆಳಗಲ್ ಪ್ರಕಾಶ್, ಗುಲ್ಬರ್ಗದ ಬೆಲ್ ಸ್ಪೇರ್ ಸಿ.ಇ.ಓ ಪ್ರಶಾಂತ ಚಿಗನೂರು, ಮಾಜಿ ಸೈನಿಕರ ಸಂಘ ಜಿಲ್ಲಾಧ್ಯಕ್ಷರು ಲಕ್ಷ್ಮಣರಾಮ ಸುಬೇದರ್ ಕಲಾವಿದರು, ಪತ್ರಕರ್ತರು ಮುಂತಾದವರು ಉಪಸ್ಥಿತರಿದ್ದರು. ಹರಿಜ್ಞಾನ ಸಂಸ್ಥೆವತಿಯಿಂದ ಪ.ಜಾ ಮತ್ತು ಪ.ಪಂ ಶಿಬಿರಾರ್ಥಿಗಳಿಗೆ ಉಚಿತ ರಂಗತರಬೇತಿಯನ್ನು ಪಡೆದವರೊ ಪ್ರಮಾಣ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ರಂಗಣ್ಣನವರು ನೀಡಿದರು. ಈ ಸಂಧರ್ಬದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನರೇಂದ್ರ ಬಾಬು ಕೆನಸ್ಟಾರ್, ಕಟ್ಟೆಸ್ವಾಮಿ ಕರಾಟೆಪಟು, ಎ.ಆರ್;ಕೃಷ್ಣ ಸಿನೇಮಾ ಸಂಕಲನಕಾರ, ಪ್ರಾಣಿ ಸಂರಕ್ಷಣೆಯ ಕೇರ್ ಸಂಸ್ಥೆಯ ಎಸ್.ಎ. ನಿಖಿತಾ ಹಾಗೂ ಬಿ. ಚಂದ್ರಶೇಖರ ಆಚಾರ್ ಸನ್ಮಾರ್ಗ ಗೆಳೆಯರ ಬಳಗÀ್ಮುಂತಾದವರಿಗೆ ಸನ್ಮಾನಿಸಲಾಯಿತು. ನಾಟಕದ ನಿರ್ದೇಶಕಾದ ಶ್ರೀ ಜೆ. ವೆಂಕೋಬಾಚಾರ್, ಕಲಾವಿದರಾದ ನೇತಿ ರಘುರಾಮ್, ರಾಧಕೃಷ್ಣ ನಾಯಕ್, ಶ್ರೀನಾಥ್ ಜೋಷಿ, ಬಸವರಾಜ್ ಬಿಸಿಹಳ್ಳಿ ಮತ್ತು ಜಿಲಾನಿಪಾಷ ಅವನ್ನು ಸನ್ಮಾನಿಸಲಾಯಿತು.
Recent comments