Skip to main content
ಕೊರೋನ ವಾರಿಯರ್ಸ್ ನೆರವಿಗೆ ಧಾವಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ.

ಕೊರೋನ ವಾರಿಯರ್ಸ್ ನೆರವಿಗೆ ಧಾವಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ.

ಕೊರೋನ ವಾರಿಯರ್ಸ್ ನೆರವಿಗೆ ಧಾವಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ.

H d ದೇವೇಗೌಡರು

ರಾಮನಗರ :ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಅವರು ರಾಮನಗರ ವಿಧಾನಸಭಾ ಕ್ಷೇತ್ರದ ಕೊರೋನಾ ವಾರಿಯರ್ಸ್‌ಗೆ ಗೌರವಧನ, ಆಹಾರ ಕಿಟ್, ಸ್ಟೀಂ ಮಿಷನ್ ವಿತರಣೆಮಾಡಿದರು.ಕೊರೋನಾ ಈ ಸಂಕಷ್ಟದ ಕಾಲದಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಸ್ಟಾಫ್ ನರ್ಸ್ ಸೇರಿದಂತೆ ಎಲ್ಲಾ ಕೊರೋನಾ ವಾರಿಯರ್ಸ್‌ಗೆ ನೆರವಿನ ಹಸ್ತನೀಡಿದರು.

ರಾಮನಗರ ಜ್ಯೂನಿಯರ್ ಕಾಲೇಜು ಮೈದಾನದ ಹತ್ತಿರ ನಡೆದ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿಅವರು ಮಾತನಾಡಿ ಇಡೀ ವಿಶ್ವವೇ ಕೊರೋನಾ ಸಮಸ್ಯೆಯಿಂದ ಕಂಗಾಲಾಗಿದೆ. ಎಷ್ಟೊ ಜನ ಹೆತ್ತವರನ್ನ, ಒಡಹುಟ್ಟಿದವರನ್ನ ಕಳೆದುಕೊಂಡು ನೋವಿನಲ್ಲಿದ್ದಾರೆ.

H d ದೇವೇಗೌಡರು

ಇಂತಹ ಸಂಧರ್ಭದಲ್ಲಿಯೂ ಕುಟುಂಬದ ಸದ್ಯಸರು ಸತ್ತವರನ್ನ ನೋಡೋಕೆ ಹತ್ತಿರದವರು ಹೋಗದ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಈ ಕಠಿಣ ಸಮಯದಲ್ಲಿ ಕೊರೋನಾ ವಾರಿಯರ್ಸ್ದ ನೀವು ಧೈರ್ಯವಾಗಿ ನಿಮ್ಮ ಪ್ರಾಣ ಭಯ ಬಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೀರಿ. ನಿಮ್ಮ ಸೇವಾ ಮನೋಭಾವ ನಿಜಕ್ಕೂ ಮೆಚ್ಚುವಂತಹದ್ದು. ಭಗವಂತ ಆದಷ್ಟು ಬೇಗ ಕರುಣೆ ತೋರಿಸಿ ಈ ಕೆಟ್ಟ ಖಾಯಿಲೆ ನಿರ್ಮೂಲನೆ ಮಾಡಲಿ. ಜನ ಸುಃಖ ಶಾಂತಿ, ನೆಮ್ಮದಿಯಿಂದ, ಆರೋಗ್ಯವಾಗಿ ಜೀವಿಸುವಂತಾಗಲಿ ಎಂದು ಹೇಳಿದರು ಜೊತೆಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ಫಲ ಸಿಗ್ತಿಲ್ಲ. ಈ ಬಗ್ಗೆ ನಾನು ಕುಮಾರಸ್ವಾಮಿ ಅವರ ಹತ್ತಿರವೂ ಮಾತನಾಡಿದ್ದೇನೆ.

H d ದೇವೇಗೌಡರು

ಸರ್ಕಾರದಿಂದ ನೀಡುವ ಸಹಾಯ ಧನವನ್ನು ಹೆಚ್ಚು ಮಾಡ್ಬೇಕು ಅಂತಾ ಬಹಳ ಸಲ ಹೇಳಿದ್ದೇನೆ.. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರುತ್ತೆ ಖಂಡಿತವಾಗಲೂ ನಾವು ನಿಮ್ಮ ಕೈ ಹಿಡಿಯುತ್ತೇವೆ.ಎಂದು ಹೇಳಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.