ವಡಗೇರಾ ಯುವಕರಿಂದ ಉಪಹಾರ ವಿತರಣೆ .
ವಡಗೇರಾ ಯುವಕರಿಂದ ಉಪಹಾರ ವಿತರಣೆ .
ಕೊರೊನಾ ವೈರಲ್ ಭೀತಿಯಿಂದ ಭಾರತ ಲಾಕ್ ಡೌನ್ ಆಗಿದೆ. ವೈದ್ಯರು ಹಾಗೂ ಪೊಲೀಸರು ಜನರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಈ ಹಿನ್ನೆಲೆ ಕರ್ತವ್ಯ ನಿರತ ಪೊಲೀಸರು ಹಾಗೂ ಲಾಕ್ ಡೌನ್ ನಿಂದ ತೊಂದರೆ ಅನುಭವಿಸುತ್ತಿರು ಜನರಿಗೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದ ಯುವಕರು ಉಪಹಾರ ಹಾಗೂ ನೀರನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಕದರಾಪೂರ ಚೆಕ್ ಪೋಸ್ಟ್, ಗೂಗಲ್ ಚೆಕ್ ಪೋಸ್ಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ಬೆಂಡೆ ಬೆಂಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮತ್ತು ಆಸ್ಪತ್ರೆಯಲ್ಲಿ ದಾಖಲೆಯಾದ ರೋಗಿಗಳಿಗೆ ಹಣ್ಣು, ಬಿಸ್ಕಿಟ್ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿದ್ದಾರೆ.
Recent comments