Skip to main content
ಎರಡನೇ ಬಾರಿಗೆ ಒಂದೇ ಅಂಗಡಿಯಲ್ಲಿ ಕಳ್ಳತನ: ಕುರಿಹಾಳ ಯುವಕ ಕಂಗಾಲು

ಎರಡನೇ ಬಾರಿಗೆ ಒಂದೇ ಅಂಗಡಿಯಲ್ಲಿ ಕಳ್ಳತನ: ಕುರಿಹಾಳ ಯುವಕ ಕಂಗಾಲು

ಎರಡನೇ ಬಾರಿಗೆ ಒಂದೇ ಅಂಗಡಿಯಲ್ಲಿ ಕಳ್ಳತನ: ಕುರಿಹಾಳ ಯುವಕ ಕಂಗಾಲು

Yadgir

ಯಾದಗಿರಿ: ರಾತ್ರಿಯ ವೇಳೆ ಅಂಗಡಿಯ ಬೀಗ ಮುರಿದು ಸಾವಿರಾರು ಮೌಲ್ಯದ ಸಾಮಾಗ್ರಿ ಹಾಗೂ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಈರಪ್ಪ ಕಾವಲಿ ಎಂಬ ಯುವಕನಿಗೆ ಸೇರಿದ ಅಂಗಡಿ ಇದಾಗಿದ್ದು, ರಾತ್ರಿಯ ವೇಳೆ ಅಂಗಡಿಗೆ ನುಗ್ಗಿದ ಖದೀಮರು, ಬೀಗ ಮುರಿದು, ಡ್ರಾಯರ್ ದಲ್ಲಿರುವ ಹಣ ಹಾಗೂ ಇತರೆ ವಸ್ತುಗಳನ್ನು ದೋಚಿದ್ದಾರೆ. ಈ ಮೊದಲು ಕೂಡ ಇದೇ ಅಂಗಡಿಯನ್ನು ಇದೇ ರೀತಿಯಾಗಿ ಕಳ್ಳತನ ಮಾಡಲಾಗಿತ್ತು. ಈಗ ಎರಡನೇ ಬಾರಿಗೆ ಮತ್ತೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಈರಪ್ಪ ಪದವಿ ಮುಗಿಸಿದ್ದು, ಉಪ ಜೀವನಕ್ಕಾಗಿ ಅಂಗಡಿ ನಡೆಸುತ್ತಿದ್ದ, ಇದೀಗ ಪದೇ ಪದೇ ಅಂಗಡಿ ಕಳ್ಳತನದಿಂದ ಕಂಗಾಲಾಗಿದ್ದಾನೆ. ವಡಗೇರಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ...

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.