Skip to main content
ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ತೆರೆಗೆ ಬರುಲು ಸಿದ್ದವಾಗಿದೆ…………….

ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ತೆರೆಗೆ ಬರುಲು ಸಿದ್ದವಾಗಿದೆ…………….

ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ತೆರೆಗೆ ಬರುಲು ಸಿದ್ದವಾಗಿದೆ…………….

ಸ್ಯಾಂಡಲ್ ವುಡ್ ಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರ ………….

ಸ್ಯಾಂಡಲ್ ವುಡ್ ಪ್ರೇಕ್ಷಕರನ್ನು ರಂಜಿಸಲು “ಎಡಬಿಡಂಗಿ” ಟಾಕೀಸ್ ಬ್ಯಾನರ್ ಅಡಿಯ ಕುಶಾಲ್ ರವರು ನಿರ್ದೇಶನದಲ್ಲಿ ಅದ್ಬುತವಾಗಿ ಮೂಡಿ ಬಂದಿರುವ ಚಿತ್ರವನ್ನು ಆದಷ್ಟು ಬೇಗ ತೆರೆಯಮೇಲೆ ತರುವಲ್ಲಿ ಚಿತ್ರತಂಡ ಸಿದ್ದತೆ ನಡೆಸಿದ್ದು,ಕನ್ನಡ ಕುರಿತಾದ ಶೀರ್ಷೀಕೆಯಳ್ಳ ಅದೆಷ್ಟೋ ಚಿತ್ರಗಳು ಸಿನಿರಸಿಕರ ಮನಗೆಲ್ಲುವಲ್ಲಿ ಈಗಾಗಲೆ ಯಶ್ವಸಿಯಾಗಿದ್ದಾರೆ ಅಂತಹ ಚಿತ್ರಗಳ ಸಾಲಿಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರವು ಸಹ ಒಂದು ವಿಭಿನ್ನ ವಿಷಯದೊಂದಿಗೆ ತರೆಮೇಲೆ ಬರುವಲ್ಲಿ ಸಜ್ಜಾಗಿದೆ ಸದ್ಯ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿರುವ ಚಿತ್ರ ಸಂಗೀತಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದರ ಜೊತೆಗೆ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯರಿಂದ ಸಂಗೀತ ನಿರ್ದೇಶನವಿದೆ ಎನ್ನುತ್ತಾರೆ ಕುಶಾಲ್. 

ಕ್ರಿಷಿ ತಾಪಂಡ

ಸಮಾಂರಂಭದಲ್ಲಿ ಭಾಗವಹಿಸಿದ್ದ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರು ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಪ್ರತಿಯೊಂದು ಹಾಡುಗಳು ಸಹ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿಬಂದಿದ್ದು. ಈ ಚಿತ್ರದ ಸಂಗೀತ ಸಂಯೋಜನೆಗೆ ಬಹಳ ಕಾಲಾವಕಾಶ ಪಡೆದು ವಿಭಿನ್ನ ಪ್ರಯತ್ನ ಮೂಲಕ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಲಾಗಿದೆ ಎಂದರು. ಇದೇ ಸಂರ್ಧಭದಲ್ಲಿ ಯೋಗರಾಜ್ ಭಟ್ ರವರ “ಪಂಚರಂಗಿ ಅಡಿಯೋ” ಎಂಬ ನೂತನ ಆಡಿಯೋ ಸಂಸ್ಥೆಗೆ ಚಾಲನೆ ನೀಡಿದ ಸಂಗೀತ ದಿಗ್ಗಜರಾದ ಹಂಸಲೇಖ ರವರು ತಮ್ಮ ಇಬ್ಬರು ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಮಾಡುತ್ತಿರುವ ಸಾದನೆಗೆ ಪ್ರಶಂಸಿದರಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೆ ನಮ್ಮ ಕನ್ನಡ ಚಿತ್ರರಂಗವು ಖ್ಯಾತಿಗಳಿಸುವಂತೆ ಮಾಡಲಿ ಎಂದು ಹಾರೈಸಿದರು.ಪ್ರತಿಯಾಗಿ ಹಂಸಲೇಖ ರವವರಿಗೆ ಸಂಗೀತ ವಾದ್ಯ ಹಾರ್ಮೊನಿಯಂ ಪಟ್ಟಿಗೆಯನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಚಿತ್ರದ ತಾರಗಣದಲ್ಲಿ ಹಿರಿಯ ನಟ ದತ್ತಣ್ಣ, ಹಾಸ್ಯ ಕಲಾವಿದರಾದ ರಂಗಯಾಣ ರಘು,ಚಿಕ್ಕಣ್ಣ ಹಾಗು ಕ್ರಿಷಿ ತಾಪಂಡ  ಮುಂತಾದ ತಾರಾಗಣವಿದ್ದು ಚಿತ್ರ ಅತಿ ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ತೆರೆಮೆಲೆ ರಾರಜಿಸಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.