ಮದ್ಲಾಪೂರದ ದಲಿತ ಯುವ ಮುಖಂಡನ ಬರ್ಬರ ಹತ್ಯ. ಸಿ ಒ ಡಿ ತನಿಖೆಗೆ ಡಿ ಎಸ್ ಎಸ್ (ರಿ ) ಕರ್ನಾಟಕ ಕಲ್ಬುರ್ಗಿ ವಿಭಾಗಿಯ ಅಧ್ಯಕ್ಷ ಎಲ್ ವಿ ಸುರೇಶ ಆಗ್ರಹ
ಸಿರವಾರ :ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದ ದಲಿತ ಯುವ ಮುಖಂಡರಾಗಿದ್ದ, ಎಮ್ ಪ್ರಸಾದ್ ಅವರನ್ನು ದಿನಾಂಕ 30-10-2023 ರಂದು ಬೆಳ್ಳಿಗ್ಗೆ 6 ಘಂಟೆ ಸುಮಾರಿಗೆ ತಾಲೂಕಿನ ಸಮೀಪದ ರಬಣಕಲ್ ಮತ್ತು ಮದ್ಲಾಪೂರ ಗ್ರಾಮದ ಕೇಲವು ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಬೆಳ್ಳಂ ಬೆಳ್ಳಿಗ್ಗೆ ಹತ್ಯ ಗೈದ ಘಟನೆ ಇಡೀ ಜಿಲ್ಲೆಯಲ್ಲದೇ ರಾಜ್ಯದ ದಲಿತ ಜನತೆಯನ್ನೇ ಬೆಚ್ಚಿಬಿಳಿಸಿದ್ದು, ಈ ಘಟನೆಯನ್ನು ಖಂಡಿಸಿ ದಲಿತ ಸಂರಕ್ಷ ಸಮಿತಿ (ರಿ )ಕರ್ನಾಟಕ ಕಲಬುರ್ಗಿ ವಿಭಾಗಿಯ ಘಟಕದ ಅಧ್ಯಕ್ಷರಾದ ಎಲ್. ವಿ ಸುರೇಶ್ಅವರು
![DSS](/sites/default/files/inline-images/IMG-20231107-WA0141.jpg)
ಇಂದು ತಾಲೂಕು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಈ ಘಟನೆಯನ್ನು ಸಿ ಒ ಡಿ ತನಿಗೆ ಒಪ್ಪಿಸಿ, ಮತ್ತು ದಲಿತ ಯುವ ಮುಖಂಡರಾಗಿದ್ದ ಎಮ್ ಪ್ರಸಾದ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಹಾಗೂ ಕುಟುಂಬದ ಸದ್ಯಸ್ಯರಿಗೆ ಸರ್ಕಾರಿ ಹುದ್ದೆ ಕೊಟ್ಟು, ಇನ್ನುಳಿದ ತಪ್ಪಿಸ್ತರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಿ ಕೊಡಬೇಕಾಗಿ ಮನವಿ ಪತ್ರ ಸಲ್ಲಿಸಿದರು.
![DSS](/sites/default/files/inline-images/IMG-20231107-WA0134.jpg)
ಇದೇ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ, ಹನುಮಂತ ಜೆ,ದೇವಪುತ್ರ ಚಿಟ್ಟಿ,ಲಕ್ಷ್ಮಣ ಮೇತ್ರಿ, ಹನುಮೇಶ್ ಭೇರಿ,ಮೇಶಕ್ ದೊಡ್ಡಮನಿ, ಮೇಶಕ್ ಕೆಂಪು,ಎಮ್ ಡೇವಿಡ್,ನಾಗರಾಜ ಜಾಗಟಗಲ್,ಮೌನೇಶ್ ಮರಾಟ,ಮಲ್ಲೇಶ್ ಚಿಕ್ಕಬಾದಾರದ್ದಿನ್ನಿ, ಬಸವರಾಜ್,ಚನ್ನಬಸವ, ಡಾಲಿ, ಭೀಮಣ್ಣ, ತಿಮ್ಮರೆಡ್ಡಿ ಇನ್ನಿತರರು ಭಾಜಿಯಾಗಿದ್ದರು.
![DSS](/sites/default/files/inline-images/IMG-20231107-WA0133.jpg)
Recent comments