ಗಂಧದಗುಡಿಯಲ್ಲಿ ಗಿಡಗಳ ನೆಡೋಣ.. ಸೀತಮ್ಮನ ಮಗನಿಗಾಗಿ ಹಾಡಿದ ಮಾನಸ ಹೊಳ್ಳ
ಗಂಧದಗುಡಿಯಲ್ಲಿ ಗಿಡಗಳ ನೆಡೋಣ.ಸೀತಮ್ಮನ ಮಗನಿಗಾಗಿ ಹಾಡಿದ ಮಾನಸ ಹೊಳ್ಳ.
ಈಗಾಗಲೇ ಚಿತ್ರೀಕರಣ ಮುಗಿಸಿ ಮಾತಿನ ಮನೆಯಲ್ಲಿರುವ 'ಸೀತಮ್ಮನ ಮಗ' ಚಿತ್ರಕ್ಕೆ ಮತ್ತೊಂದು ಗೀತೆ ಸೇರ್ಪಡೆಯಾಗಿದೆ. ನಿರ್ದೇಶಕ ಯತಿರಾಜ್ ಬರೆದಿರುವ ' ಗಂಧದಗುಡಿಯಲ್ಲಿ ಗಿಡಗಳ ನೆಡೋಣ..ಹಸಿರಲ್ಲೆ ಎಲ್ಲರು ಉಸಿರನು ಕಾಣೋಣ ಎಂಬ ಸಂದೇಶಭರಿತ ಗೀತೆಯನ್ನು ಇತ್ತೀಚೆಗೆ ರೇಣು ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು. ವಿನು ಮನಸು ಅವರ ಸಂಗೀತ ಸಂಯೋಜನೆಯಲ್ಲಿ ಹಾಡಿದ ಮಾನಸಹೊಳ್ಳ ' ಈವತ್ತಿನ ಜನರೇಷನ್ ಮರೆತಿರುವುದನ್ನು ನೆನಪಿಸುವ ಹಾಡು ಇದಾಗಿದೆ. ಪರಿಸರ, ಸ್ವಚ್ಚತೆ, ಆರೋಗ್ಯ ಮತ್ತು ವಿದ್ಯೆಯ ಮಹತ್ವವನ್ನು ಸಾರುವ ಉತ್ತಮ ಗೀತೆ ಹಾಡಲು ದೊರೆತ್ತಿದ್ದು ನನಗೆ ಖುಷಿ ನೀಡಿದೆ ' ಎಂದು ಹೇಳಿದರು.
ಕಥೆ, ಚಿತ್ರಕಥೆ, ಸಂಭಷಣೆ ಮತ್ತು ನಿರ್ದೇಶನ : ಯತಿರಾಜ್ ನಿರ್ಮಾಪಕ : ಕೆ ಮಂಜುನಾಥ್ ನಾಯಕ್ ಛಾಯಾಗ್ರಹಣ : ಜೀವನ್ ರಾಜ್ ಸಂಗೀತ : ವಿನು ಮನಸು ಸಂಕಲನ : ಯತೀಶ್ ಕುಮಾರ್. ಕಲಾ ನಿರ್ದೇಶನ : ಮೋಹನ್ ಬಿ ಕೆರೆ ಸಹ ನಿರ್ದೇಶನ : ಶಶಿಕುಮಾರ್ ಇಜ್ಜಲಘಟ್ಟ ಯತಿರಾಜ್, ಚರಣ್ ಕಾಸಲ, ಚೈತ್ರಾ, ಸೋನು ಸಾಗರ, ಬಸವರಾಜ್, ಬುಲೆಟ್ ರಾಜು, ಜೀವನ್ ರಾಜ್, ಮಂಜುನಾಥ್ ನಾಯಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
Recent comments