Skip to main content
ಸ್ವದೇಶ ಹಾಗೂ ವಿದೇಶ ಎರಡರಲ್ಲೂ "ಬಹುಕೃತ ವೇಷಂ" ಬಿಡುಗಡೆ.

ಸ್ವದೇಶ ಹಾಗೂ ವಿದೇಶ ಎರಡರಲ್ಲೂ "ಬಹುಕೃತ ವೇಷಂ" ಬಿಡುಗಡೆ.

ಸ್ವದೇಶ ಹಾಗೂ ವಿದೇಶ ಎರಡರಲ್ಲೂ "ಬಹುಕೃತ ವೇಷಂ" ಬಿಡುಗಡೆ.

Kannada

ಕೊರೋನ ನಂತರ ಕನ್ನಡ ಚಿತ್ರರಂಗದಲ್ಲಿ ಸುಗ್ಗಿಯ ವಾತಾವರಣ. ಸಾಲುಸಾಲು ಚಿತ್ರಗಳು ತೆರೆ ಕಾಣುತ್ತಿದೆ.‌ ಇದೇ ಹದಿನೆಂಟರಂದು ವಿಭಿನ್ನ ಕಥೆಯ "ಬಹುಕೃತ ವೇಷಂ" ಚಿತ್ರ ಕೂಡ ಬಿಡುಗಡೆಯಾಗುತ್ತಿದೆ.‌ ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಸಿನಿಮಾ ನಮ್ಮದು. ಇದೇ ಹದಿನೆಂಟರಂದು ಕರ್ನಾಟಕದ 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ತೆರೆ ಕಾಣುತ್ತಿದೆ.‌

ಅಲ್ಲದೆ ಯು.ಎಸ್.ಎ ನಲ್ಲೂ ಕೂಡ ಇದೇ ದಿನ‌ ಸುಮಾರು 25 ಕ್ಕೂ ಹೆಚ್ಚು ಕಡೆ ನಮ್ಮ ಚಿತ್ರ ಬಿಡುಯಾಗುತ್ತಿರುವುದು ಸಂತಸದ ವಿಷಯ. ನಮ್ಮ ಚಿತ್ರದ ಟ್ರೇಲರ್ ವೀಕ್ಷಿಸಿದ ಅಲ್ಲಿನ‌ ನಿವಾಸಿಯೊಬ್ಬರು ನಮ್ಮ ಚಿತ್ರವನ್ನು ಯು.ಎಸ್.ಎ ನಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ ಪ್ರಚಾರದ ಎರಡು ವಾಹನಗಳು ರಾಜ್ಯಾದ್ಯಂತ ಸಂಚರಿಸುತ್ತಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಶಶಿಕಾಂತ್. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. "ಉದರ ನಿಮಿತ್ತಂ ಬಹುಕೃತ ವೇಷಂ" ಎಂಬುದರಿಂದ ನಮ್ಮ ಚಿತ್ರದ ಶೀರ್ಷಿಕೆ ತೆಗೆದುಕೊಳ್ಳಲಾಗಿದೆ.

ಮನುಷ್ಯ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕುತ್ತಾನೆ‌‌. ಇದೇ ಕಥೆಯ ಸಾರಾಂಶ.‌ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರಾಸೆಯಂತೂ ಖಂಡಿತಾ ಆಗುವುದಿಲ್ಲ ಎನ್ನುತ್ತಾರೆ ಬಿಗ್ ಬಾಸ್ ಖ್ಯಾತಿಯ ನಟಿ ವೈಷ್ಣವಿ. ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಹದಿನೆಂಟರಂದು ತೆರೆಗೆ ಬರುತ್ತಿದೆ. ನನ್ನ ಮೊದಲ ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹವನ್ನು ಈ ಚಿತ್ರದಲ್ಲೂ ಮುಂದುವರೆಸಬೇಕೆಂದರು ನಿರ್ದೇಶಕ ಪ್ರಶಾಂತ್ ಕೆ ಯರಂಪಳ್ಳಿ. ಕಥೆ ಬರೆದಿರುವ ಅಧ್ಯಾಯ್ ಸಹ ಸಿನಿಮಾ ಕುರಿತು ಮಾತಾನಾಡಿದರು. ಎಸ್ ನಂದ ಹಾಗೂ ಡಿ.ಕೆ ರವಿ ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರಶಾಂತ್ ಕೆ ಯರಂಪಳ್ಳಿ ನಿರ್ದೇಶಿಸಿದ್ದಾರೆ. ಅಧ್ಯಾಯ್ ಕಥೆ ಚಿತ್ರಕಥೆ ಬರೆದಿದ್ದಾರೆ. ಹರ್ಷಕುಮಾರ್ ಗೌಡ ಛಾಯಾಗ್ರಹಣ, ವೈಶಾಖ್ ಭಾರ್ಗವ್ ಸಂಗೀತ ನಿರ್ದೇಶನ ಹಾಗೂ ಜ್ಞಾನೇಶ್ ಬಿ ಮಠದ್ ಸಂಕಲನ ಈ ಚಿತ್ರಕ್ಕಿದೆ. ಶಶಿಕಾಂತ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ನಟಿ ವೈಷ್ಣವಿ ನಟಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.