ಸಣ್ಣ ರೈತ ಮಹಿಳೆಯ ವಿಡಿಯೋಗೆ ಸ್ಪಂದನೆ ನೀಡಿದ ಹೆಚ್ ಡಿ ಕೆ .
ಸಣ್ಣ ರೈತ ಮಹಿಳೆಯ ವಿಡಿಯೋಗೆ ಸ್ಪಂದನೆ ಮಾಡಿದ ಹೆಚ್ ಡಿ ಕೆ .
ರಾಮನಗರ:ಇಂದು ರಾಮನಗರದ ಜಿಲ್ಲೆಯಲ್ಲಿ ಬಡ ಕುಟುಂಬಗಳಿಗೆ ಆಹಾರ ಕಿಟ್ ಒದಗಿಸಿಸಲು ಬಂದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರ ಸ್ವಾಮಿಯವರು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೋನಾ ಎಫೆಕ್ಟ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ವಿಚಾರದಿಂದ ಇವತ್ತು 50 ಸಾವಿರ ಕೋಟಿ ಮ್ಯೂಚುವಲ್ ಫಂಡ್ ಹಣ ಘೋಷಣೆ ಮಾಡಿದ್ದಾರೆ ಅದು ದೊಡ್ಡ ಮಾಲೀಕರಿಗೆ ಅನುಕೂಲವಾಗಲಿದೆ ಅದರಿಂದ ಜನಸಾಮಾನ್ಯರಿಗೆ ಏನು ಅನುಕೂಲವಿಲ್ಲ ಈಗ ಲಕ್ಷಾಂತರ ಕುಟುಂಬಗಳಿಗೆ ಸರ್ಕಾರ ಶಕ್ತಿ ತುಂಬಬೇಕು ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಬಗ್ಗೆ ಸರ್ಕಾರ ಗಮನಕೊಟ್ಟಿಲ್ಲ ಕೂಲಿ ಕಾರ್ಮಿಕರು, ರೈತರ ಬೆಳೆಗಳ ಬಗ್ಗೆ ಸರಿಯಾದ ನಿಲುವಿಲ್ಲ.
ಚಿತ್ರದುರ್ಗಾದ ಓರ್ವ ಹೆಣ್ಣು ಮಗಳು ಈರುಳ್ಳಿ ಬೆಳೆದು ಮಾರಾಟ ಮಾಡಲಾಗಿಲ್ಲ ಆ ಹೆಣ್ಣು ಮಗಳು ಸಿಎಂ ಗಮನಸೆಳೆದು ಅಳಲು ತೋಡಿಕೊಂಡಿದ್ದಾಳೆ ಸಿಎಂ ಕೂಡ ಅವಳ ನೋವಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಇದು ಓರ್ವ ಹೆಣ್ಣಿನ ಸಮಸ್ಯೆ ಅಲ್ಲ, ಇದು ಇಡೀ ರೈತ ಸಮುದಾಯದ ಸಮಸ್ಯೆ ರಾಜ್ಯದ ಕೃಷಿಕರಿಗೆ ನೀವು ನ್ಯಾಯ ಕೊಡಿಸಬೇಕು ಸಿಎಂ ಗೆ ನಾನು ಈ ಮೂಲಕ ಮನವಿ ಮಾಡ್ತೇನೆ 450 ಕೋಟಿ ಪರಿಹಾರ ಕೊಡಲು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ ಅದನ್ನಾದರೂ ಕೂಡಲೇ ಜಾರಿ ಮಾಡಬೇಕು ಎಂದು ಸಿಎಂ ಯಡಿಯೂರಪ್ಪಗೆ ಮಾಜಿ ಮುಖ್ಯಮಂತ್ರಿ ಗಳಾದ ಹೆಚ್ ಡಿ ಕುಮಾರ ಸ್ವಾಮಿಯವರು ಮನವಿ ಮಾಡಿದರು .
Recent comments