ಪ್ರಪಂಚದ ದುಬಾರಿ ಆ್ಯಂಟಿಕ್ ಕಳ್ಳರೆಲ್ಲಾ ಬುದ್ಧನ ಹಲ್ಲಿನ ಹಿಂದೆ ಬಿದ್ದಿದ್ಯಾಕೆ ಗೊತ್ತಾ.?
ಬುದ್ಧನ ಹಲ್ಲಿನ ರೋಚಕ ಕತೆ ಗೊತ್ತಾ.
ಪ್ರಪಂಚದ ದುಬಾರಿ ಆ್ಯಂಟಿಕ್ ಕಳ್ಳರೆಲ್ಲಾ ಬುದ್ಧನ ಹಲ್ಲಿನ ಹಿಂದೆ ಬಿದ್ದಿದ್ಯಾಕೆ ಗೊತ್ತಾ.?
ನಿಮಗೆಲ್ಲಾ ಭಗವಾನ್ ಬುದ್ಧನ ಬಗ್ಗೆ ಎಲ್ಲಾನಚನ್ನಾಗಿ ಗೊತ್ತು.ಆದ್ರೆ ಆತನ ಹಲ್ಲಿನ ಹಿಂದಿರುವ ರೋಚಕ ಸ್ಟೋರಿನಿಗೆಲ್ಲ ಗೊತ್ತಿಲ್ಲ.ಯಾಕಂದ್ರೆ ಭೂಗತ ಜಗತ್ತಿನಲ್ಲಿ ಭಾರಿ ಬೇಡಿಕೆ ಇರುವ ಆ್ಯಂಟಿಕ್ ವಸ್ತು ಅಂದ್ರೆ ಬುದ್ಧನ ಹಲ್ಲು..ಹಾಗಾದ್ರೆ ಏನಿದು ಬುದ್ಧನ ಹಲ್ಲಿನ ರಹಸ್ಯ ಮುಂದೆ ಓದಿ. ಇವತ್ತು ಕುಖ್ಯಾತ ಆ್ಯಂಟಿಕ್ ಕಳ್ಳರ ಕೆಂಗಣ್ಣು ಈ ಬುದ್ಧನ ಹಲ್ಲಿನ ಮೇಲೆ ಬಿದ್ದಿದೆ. ಇದು ಶ್ರೀಲಂಕಾದ ಕ್ಯಾಂಡಿ ಎಂಬ ಬೌದ್ಧ ಮಂದಿರವು ವಿಶ್ವ ಪ್ರಸಿದ್ದ ಬೌದ್ಧ ದೇವಾಲಯ ಇಲ್ಲಿನ ದಳವೆಂದ ಮ್ಯುಸಿಯಮ್ ನಲ್ಲಿ ಬುದ್ದನ ದಂತ ವೆಂದು ನಂಬಲಾದ ಹಲ್ಲೊಂದನ್ನ ಸಂರಕ್ಷಿಸಿ ಇಡಲಾಗಿದೆ. ಇದನ್ನ ನೋಡಲು ಜನ ದೂರದೂರುಗಳಿಂದ ಮುಗಿಬಿದ್ದು ನೋಡಲು ಬರುತ್ತಾರೆ ಹಾಗೆ ಈ ದಂತಕ್ಕೆ ಕೈ ಮುಗಿದು ಪೂಜೆ ಮಾಡಿ ಹೋಗುತ್ತಾರೆ.
೧೯೯೮ ರಲ್ಲಿ ಎಲ್ಎಲ್ ಟಿಇ ಉಗ್ರರ ದಾಳಿಯಿಂದಾಗಿ ಈ ಮಂದಿರಾ ಹಾಗೂ ಮ್ಯೂಸಿಯಂಗೆ ಹಾನಿ ಮಾಡಿದ್ರು.ಹೀಗಾಗಿಯೇ ಈ ಮಂದಿರಕ್ಕೆ ಬಿಗಿ ಭದ್ರತೆಯನ್ನ ಒದಗಿಸಲಾಗಿದೆ. ಈ ಬುದ್ಧನ ಹಲ್ಲಿನ ಬಗ್ಗೆ ಚರಿತ್ರೆಯಲ್ಲಿ ತುಂಬಾ ವಿಷಯಗಳಿ ಇವೆ ಇನ್ನು ಬುದ್ದನ ಸಾವಿನ ನಂತರ ಆತನ ಆಸೆಯಂತೆ ದೇಹವನ್ನ ಸುಡಲಾಯ್ತು.ನಂತರ ಆತನ ದಿನ ಬಳಕೆ ವಸ್ತುಗಳನ್ನ ವಶ ಪಡೆದು ರಕ್ಷಿಸಲಾಯ್ತು.ಇದೇ ರೀತಿ ಆತನ ಚಿತಾ ಭಸ್ಮದಲ್ಲಿ ಬೂದಿಯಾಗದೆ ಉಳಿದ ಆತನದವಡೆ ಹಲ್ಲನ್ನ ಸಂರಕ್ಣಿಸಿ ಇಡಲಾಯಿತಂತೆ.ಇನ್ನು ಬುದ್ದನ ಸಾವಿನ ಬಳಿಕ ಅಂದ್ರೆ ೨೦೦, ೩೦೦ ವರ್ಷಗಳ ಹಿಂದೆ ಹುಟ್ಟುಹಾಕಿದ್ದ. ಧರ್ಮದಲ್ಲಿ ಬಿರುಕು ಮೂಡಿತ್ತು.
.ಹೀನಾಯಾನ ಹಾಗೂ ಮಹಾಯಾಮ ಎಂಬ ಕವಲುಗಳು ಒಡೆಯುತ್ತಿದ್ದಂತೆ. ನಂತರ ಬುದ್ಧನ ಮೂಲ ಆರಾಧಕರು ತದನಂತರ ಬಂದ ವಿಗ್ರಹಯಾನದ ಜೊತೆ ಹೊಂದಿಕೊಳ್ಳೊಕೆ ಕಷ್ಟವಾಯ್ತು.
ಈ ರೀತಿ ದೂರವಾರ ಗುಂಪೇ ತೇರಾವಾದಿಳು ಅಂತ ಗುರುತಿಸಿಕೊಂಡರು. ಮುಂದೆ ಎಷ್ಟೋ ವರ್ಷಗಳ ಕಾಲ ಬುದ್ಧನ ಹಲ್ಲು, ಆತನ ದಿನ ಬಳಕೆ ವಸ್ತುಗಳು ಇವರ ಹತ್ತಿರನೇ ಇದ್ದವು. ನಂತರ ಆ ಹಲ್ಲಿಗಾಗಿ ಹಲವಾರು ಧಾರ್ಮಿಕ ಘರ್ಷಣೆ ಗಳು ನಡೆದು ಹೋದವು. ಈ ಒಂದು ದಂತಕ್ಕಾಗಿ, ಕ್ರಿಸ್ತಶಕ ೧ ರಿಂದ ೧೫ರ ವರೆಗೂ ನಡೆದ ರಕ್ತಪಾತ ಹಾಗೂ ಯುದ್ಧಗಳು ಅನೇಕ. ಈ ಅವದಿಯಲ್ಲಿ ಬುದ್ದನ ದಂತ ಒಬ್ಬರಿಂದ ಒಬ್ಬರಿಗೆ, ಸಾಮ್ರಾಜ್ಯದಿಂದ ಸಾಮ್ರಾಜ್ಯಕ್ಕೆ, ಮನೆತನದಿಂದ, ಮನೆತನಕ್ಕೆ ಬಲು ರೋಚಕವಾದ್ದುದ್ದು, ಶ್ರೀಲಂಕಾದಲ್ಲೇ ಸುಮಾರು ೫ ರಿಂದ ೬ ಶತಮಾನಗಳ ಕಾಲ ಅಲ್ಲಿನ ರಾಜರ ಒಡೆತನದಲ್ಲೇ ಇತ್ತು.
ನಂತರ ಆ ದಂತ ಗುಹಾಂತರ ದೇಗುಲಗಳಲ್ಲಿ ಈ ದಂತವನ್ನ ರಾಜರು ಗೌರವಿಸುತ್ತಿದ್ದ, ಚಿತ್ರಲಿಪಿಗಳಿ ಇಂದಿಗೂ ಲಭ್ಯವಿದೆ.
ಈಗ ಲಂಕೆಯ ಮಂದಿರದ ಬಳಿಯ ಮ್ಯೂಸಿಯಂ ನಲ್ಲಿ ಇದೇ ದಂತ ಇರೋದು ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಈದನ್ನ ನೊಲಡುವಂತಹ ಯಾವುದೇ ಪ್ರಜ್ಞಾವಂತನು ಈ ನಂಬಿಕೆಗೆ ಸೋಲಲಾರ. ಇದಕ್ಕೆ ಕಾರಣ ಈ ದವಡೆ ಸುಮಾರು ಮೂರಿಂಚು ಉದ್ದವಿದೆ ಆದ್ರೆ ಮಾನವನದವಡೆ ಎರಡಿಂಚು ಉದ್ದವಿರುತ್ತೆ.
ಆದ್ರೆ ಇದು ಯಾವುದೋ ಮೂಳೆಯ ಚುರುರಿರಬಹುದು ಎಂಬುದು ಅನಿಸುತ್ತೆ.ಇಷ್ಟೇ ಅಲ್ಲ ಕ್ರಿಸ್ತಶಕ ೧೫ನೇ ಶತಮಾನದಲ್ಲಿ ಓರ್ವ ಕ್ರೈಸ್ತಪಾದಿ ಕೈಗೆ ಸಿಕ್ಕು ಇದನ್ಮ ಜಜ್ಜಿ ಪುಡಿಮಾಡಿ ಸಮುದ್ರಕ್ಕೆ ಎಸೆದನೆಂಬ ಉಲ್ಲೇಖವು ಸಹ ಚರಿತ್ರೆಯಲ್ಲಿ ಇದೆ.
ಅಲ್ಲದೆ ಈ ಹಲ್ಲು ನಮ್ಮ ರಾಷ್ಟದಲ್ಲಿ ಇದೆ ಅಂತ. ಥೈವಾನ್, ಭೂತನ್, ಶ್ರೀಲಂಕಾ, ಜವಾನ್ ವಾದಿಸುತ್ತಿವೆ.ಅದು ಏನೇ ಇರಲಿ ಒಂದಂತು ಸತ್ಯ ಭೂಗತ ಜಗತ್ತಿನಲ್ಲಿ ಭಾರಿ ಬೇಡಿಕೆ ಇರುವ ಆ್ಯಂಟಿಕ್ ಪೀಸ್ ನ ಹಲ್ಲು ಇದೀಗ ಕುಖ್ಯಾತ ಕಳ್ಳರ ಕೆಂಗಣ್ಣಿಗೆ ಗುರಿಯಾಗಿದೆ..
Recent comments