Skip to main content
“ಕಟ್ಲೆ” ಚಿತ್ರತಂಡದಿಂದ ಲಾಕ್ ಡೌನ್ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಿನ ಆಸರೆ.

“ಕಟ್ಲೆ” ಚಿತ್ರತಂಡದಿಂದ ಲಾಕ್ ಡೌನ್ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಿನ ಆಸರೆ.

“ಕಟ್ಲೆ” ಚಿತ್ರತಂಡದಿಂದ ಲಾಕ್ ಡೌನ್ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಿನ ಆಸರೆ.

kannada film

ಬೆಂಗಳೂರು: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ರ 2 ನೇ ಅಲೆಯ ತೀವ್ರತರ ಪರಿಣಾಮದಿಂದಾಗಿ ಚಿತ್ರೋದ್ಯಮ ವನ್ನೇ ಅವಲಂಬಿತರಾಗಿದ್ದ ಸಹಾಯಕ ಕಲಾವಿದರು ಹಿರಿಯ ಕಲಾವಿದರು , ತಂತ್ರಜ್ಞರು ಸಾಕಷ್ಟು ಸಂಕಷ್ಟದ ದಿನಗಳನ್ನು ಅನುಭವಿಸುವಂತಾಗಿದೆ . ಇಂತಹ ಸಂದಿಗ್ದ ಸಂದರ್ಭದಲ್ಲಿ ತಮ್ಮದೇ ಕುಟುಂಬದ ಸದಸ್ಯರಿಗೆ ಸಹಾಯದ ನೆರವಿಗೆ ಮುಂದಾಗಿರುವುದು “ಕಟ್ಲೆ” ಚಿತ್ರ ತಂಡ. ಕಳೆದ ಒಂದು ತಿಂಗಳಿನಿಂದ ಕಟ್ಲೆ ಚಿತ್ರದ ನಿರ್ಮಾಪಕರಾದ ಭರತ್ ಗೌಡ ರವರು ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅಗತ್ಯ ಆಹಾರ ಕಿಟ್ ಗಳನ್ನು ನೀಡುವ ಮೂಲಕ ಹಲವರಿಗೆ ಅಸರೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರರಂಗದ ಹಿರಿಯ ಕಲಾವಿದರು. ತಂತ್ರಜ್ಞರು ಹಾಗೂ ಸಂಕಷ್ಟದಲ್ಲಿರುವಂತಹ ಮಂಗಳ ಮುಖಿಯರಿಗೂ ಸಹ ಆಹಾರ ಕಿಟ್ ಗಳನ್ನು ನೀಡುವಲ್ಲಿ ನಿರತರಾಗಿದ್ದಾರೆ. ಕಟ್ಲೆ ಚಿತ್ರದ ನಾಯಕ ನಟ ಕೆಂಪೇಗೌಡ ಹಾಗೂ ಭರತ್ ಗೌಡ ಚಾರಿಟಬಲ್ ಟ್ರಸ್ಟ್ ನ ತಂಡ ನೆರವಿನ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.