Skip to main content
ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .

ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .

ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .

ಕನ್ನಡ ಚಿತ್ರರಂಗದಲ್ಲಿ ಯಾರದ್ರು ಕಾಮಿಡಿ ನಟರ ಹೆಸರು ಹೇಳಿ ಅಂದ್ರೇ ತಟ್ನೆ ನೆನಪಿಗೆ ಬರುವ ಹೆಸರು ಸಾಧು ಕೋಕಿಲ ಅಂತ ಅಂತಹ ಮಹಾನ್ ಹಾಸ್ಯ ಕಾಲಾವಿದ ತಮಗೆ ಸಾರಿಸಾಟಿ ಯಾಗುವಂತಹ ಇನ್ನೋಬ್ಬ ಹಾಸ್ಯ ನಟನೊಂದಿಗೆ ಅಭಿನಯಿಸಿದರೆ. ಯಾವ್ ರೀತಿ ಚಿತ್ರ ಮೂಡಿಬರಬಹುದು ಒಂದ್ ಸಾರಿ ಯೋಚನೆ ಮಾಡಿದರೆ. ನಗುವಿಗೆ ಕೊನೆಯೇ ಇಲ್ಲ ಅನಿಸುತ್ತೆ.

ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ನಿರ್ದೇಶಕ ಕೆ.ಅರ್.ಮುರುಳಿ ಕೃಷ್ಣ.

ಹಿಂದಿಯ ಖ್ಯಾತ ಹಾಸ್ಯ ನಟ ಜಾನಿ ಲಿವರ್ ಮತ್ತು ಕನ್ನಡದ ಹೆಸರಾಂತ ಹಾಸ್ಯ ನಟ ಸಾಧು ಕೋಕಿಲ ಅವರನ್ನು ಒಗ್ಗೂಡಿಸಿ ನಿರ್ದೇಶಕ ಕೆ.ಆರ್. ಮುರಳೀಕೃಷ್ಣ ಅವರು ‘ಗರ’ ಸಿನಿಮಾ ಸಿದ್ಧಪಡಿಸಿದ್ದಾರೆ. ಇಷ್ಟೇ ಇಲ್ಲ. ಈ ಚಿತ್ರದಲ್ಲಿ ಇನ್ನೊಂದು ವೈಶಿಷ್ಟ್ಯ ಕೂಡ ಇದೆಯಂತೆ. ಈ ವೈಶಿಷ್ಟ್ಯದ ಬಗ್ಗೆ ಮುರಳೀಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ‘ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಪಾತ್ರಗಳನ್ನು ಈ ಚಿತ್ರದಲ್ಲಿ ಸೃಷ್ಟಿಸಿದ್ದೇನೆ’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಲಾಯರ್ ಆಗಿ ಕೆಲಸ ಮಾಡಿದವನು ನಾನು. ಒಂದು ಸಿನಿಮಾದ ನಿರ್ದೇಶನ ಹೇಗೆ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಮಾಡಿದ್ದೇನೆ ಎಂಬುದು ನಿಜ’ ಎಂದು ತಮ್ಮ ಬಗ್ಗೆಯೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಮಾತು ಆರಂಭಿಸಿದರು ಮುರಳೀಕೃಷ್ಣ. ‘ನನ್ನನ್ನು ನಾನು ಕಂಡುಕೊಂಡ ಕಥೆ ಗರ. ಇದರಲ್ಲಿ ಬರುವ ಎರಡು ಪಾತ್ರಗಳು ನಾನೇ. ಆಕಸ್ಮಿಕಾ ಎಂಬ ಹುಡುಗಿಯ ಪಾತ್ರವೊಂದು ಈ ಚಿತ್ರದಲ್ಲಿದೆ. ಈಕೆಯ ಜೀವನದಲ್ಲಿ ಎಲ್ಲವೂ ಆಕಸ್ಮಿಕಗಳೇ ಆಗಿಬಿಡುತ್ತವೆ’ ಎಂದೂ ಅವರು ಹೇಳಿದರು. ಚಿತ್ರೀಕರಣ‌ ಮುಗಿದಿದೆ. ಆದರೆ, ಚಿತ್ರದ ನಿರ್ಮಾಪಕರು ಇಲ್ಲಿಗೆ (ಪತ್ರಿಕಾಗೋಷ್ಠಿಗೆ) ಬರಲು ಸಿದ್ಧರಿಲ್ಲ. ಚಿತ್ರದ ನಿರ್ಮಾಪಕರು ಯಾರು ಎಂಬುದನ್ನು ಮುಂದೊಮ್ಮೆ ತಿಳಿಸಲಾಗುವುದು ಎಂದರು. ಕೇರಳದ ನಟಿ ಆವಂತಿಕಾ ಮೋಹನ್, ಕನ್ನಡತಿ ನೇಹಾ ಪಾಟೀಲ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೆಹಮಾನ್ ಹಾಸನ್ ಕೂಡ ಒಂದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಜಾನಿ ಲಿವರ್ ಮತ್ತು ಸಾಧು ಕೋಕಿಲ ಇದರಲ್ಲಿ ಸಹೋದರರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕನ್ನಡದ ಸೊಗಡಿನ ಚಿತ್ರ‌ ಇದು. ಪರಭಾಷೆಗಳ ನೆರಳು ಇದರಲ್ಲಿ ಇಲ್ಲ. ಪ್ರತಿ ಪಾತ್ರಕ್ಕೂ ಮಹತ್ವ ಇದೆ. ಎಲ್ಲ ಪಾತ್ರಗಳೂ ನೆನಪಲ್ಲಿ ಉಳಿಯುತ್ತವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಟ್ಟರು ರೆಹಮಾನ್. ಕಾರಣಾಂತರಗಳಿಂದ ತುಸು ತಡವಾಗಿ ಪತ್ರಿಕಾಗೋಷ್ಠಿಗೆ ಬಂದ ಜಾನಿ, ಸಭಾಂಗಣ ಪ್ರವೇಶಿಸುವಾಗಲೇ ಎಲ್ಲರ ಮುಖದಲ್ಲೂ ನಗು ಮೂಡಿಸಿದರು. ‘ಸಾಧು ಭಾಯ್ ಜೊತೆ ಕೆಲಸ ಮಾಡಿದ್ದು ನಂಗೆ ಬಹಳ ಖುಷಿ ಕೊಟ್ಟಿತು’ ಎಂದು ತಮ್ಮದೇ ಶೈಲಿಯ ಕನ್ನಡದಲ್ಲಿ ಹೇಳಿದರು.

ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .
ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .

‘ನಾನು ಆಂಧ್ರ ಪ್ರದೇಶದವನು. ಆದರೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕೆಲಸ ಮಾಡಿದ್ದು ಇದೇ ಮೊದಲು. ಆರಂಭದಲ್ಲಿ ತುಸು ಅಳುಕು ಇತ್ತಾದರೂ ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಂಭಾಷಣೆ ಒಪ್ಪಿಸುವುದನ್ನು ರೂಢಿಸಿಕೊಂಡೆ’ ಎಂದರು.

ಜಾನಿ ಅವರು ಈ ಚಿತ್ರದಲ್ಲಿ ಅಭಿನಯಿಸುವಾಗ ಸಾಧು ಅವರ ಸಹಾಯ ದೊಡ್ಡದಿತ್ತಂತೆ. ‘ನಾನು ಚಿತ್ರದ ಡಬ್ಬಿಂಗ್ ಕೆಲಸದಲ್ಲಿಯೂ ಪಾಲ್ಗೊಳ್ಳುವೆ’ ಎಂದರು ಜಾನಿ. ‘ಬೇರೆ ಭಾಷೆಯಲ್ಲಿ ಸಂಭಾಷಣೆ ಒಪ್ಪಿಸಿ, ಆ ಮೂಲಕ ಹಾಸ್ಯ ಸೃಷ್ಟಿಸುವುದು ಕಷ್ಟ. ಹಾಗೆ ಮಾಡಲು ಭಾಷೆ ಮೇಲೆ ಗಟ್ಟಿಯಾದ ಹಿಡಿತ ಬೇಕಾಗುತ್ತದೆ. ಆದರೆ ಜಾನಿ ಅದನ್ನು ಮಾಡಿದ್ದಾರೆ’ ಎಂದರು ಸಾಧು. ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರೂ ಪತ್ರಿಕಾಗೋಷ್ಠಿಗೆ ಬಂದಿದ್ದರು. ಕನ್ನಡ ಸಿನಿಮಾ ಜನರ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಇಲ್ಲಿನ ಜನ ಮುಂಬೈ ಜನರಿಗಿಂತ ಹೆಚ್ಚು ವೃತ್ತಿಪರರು’ ಎಂದು ಖುಷಿ ವ್ಯಕ್ತಪಡಿಸಿದರು. ನೇಹಾ ಮತ್ತು ಆವಂತಿಕಾ ಚುಟುಕಾಗಿ ಎರಡು ಮಾತುಗಳನ್ನು ಆಡಿದರು. ‘ನಂದು ಮುಖ್ಯವಾದ ಪಾತ್ರ. ನನ್ನ ಪಾತ್ರದಿಂದಾಗಿ ಸಿನಿಮಾದಲ್ಲಿ ಒಂದು ಟ್ವಿಸ್ಟ್ ಸಿಗುತ್ತದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.